Thursday, 24 April 2014

ಎಲ್ಲಾ ವಸ್ತುಗಳು ಕೊಡುವ ಆನಂದ ಕ್ಷಣಿಕವಾದದ್ದು.

ಶಾಂತಿ ಮತ್ತು ಆನಂದಕ್ಕಾಗಿ
ನಾವೆಲ್ಲರೂ ನಿರಂತರ
ಹುಡುಕಾಟದಲ್ಲಿದ್ದೇವೆ. ಈ ಹುಡುಕಾಟ
ಸಾರ್ವತ್ರಿಕ. ನಿಜ ಹೇಳಿ,
ತಾನು ದುಃಖದಲ್ಲಿರಬೇಕು ಎಂದುಕೊಳ್ಳುವವರು ಯಾರಾದರೂ ಇದ್ದಾರೆಯೇ?
ಜನ ಹಲವು ಬಗೆಯಲ್ಲಿ ಸಂತೋಷದ
ಹುಡುಕಾಟದಲ್ಲಿ ತೊಡಗಿದ್ದಾರೆ. ಕೆಲವರಿಗೆ
ಸಂಪತ್ತು ಮತ್ತು ವಸ್ತುಗಳು ಸಂತೋಷ
ಕೊಟ್ಟರೆ ಇನ್ನೂ ಕೆಲವರಿಗೆ ಖ್ಯಾತಿ
ಆನಂದವನ್ನುಂಟುಮಾಡುತ್ತದೆ. ಚಲನಚಿತ್ರ
ನೋಡುವುದರಿಂದ, ಸಂಗೀತ
ಕೇಳುವುದರಿಂದ ಸಾಂಸ್ಕೃತಿಕ
ಕಾರ್ಯಕ್ರಮಗಳ ವೀಕ್ಷಣೆಯಿಂದ, ಟಿವಿ
ನೋಡುವುದರಿಂದ ಐಹಿಕ
ಸುಖಭೋಗಗಳಲ್ಲಿ
ತೊಡಗಿಕೊಳ್ಳುವುದರಲ್ಲಿ ಖುಷಿ
ಕಾಣುತ್ತಾರೆ. ಕೆಲವರಿಗೆ ಆಟೋಟಗಳಲ್ಲಿ
ಭಾಗವಹಿಸುವುದು ಮತ್ತು ಅದನ್ನು ನೋಡುವುದೆಂದರೆ
ಎಲ್ಲಿಲ್ಲದ ಉತ್ಸಾಹ. ಮಾದಕ ವ್ಯಸನ
ಮತ್ತು ಕುಡಿತದಲ್ಲಿ ತಮ್ಮ ಆನಂದ
ಕಂಡುಕೊಳ್ಳುವವರಿದ್ದಾರೆ. ತಮ್ಮ
ಇಷ್ಟಗಳನ್ನು ಈಡೇರಿಸಿಕೊಳ್ಳುವುದರಲ್ಲೇ ಅನೇಕರು ಸುಖ
ಕಂಡಿದ್ದಾರೆ. ಒಂದು ಕಾರು, ಮನೆ ಕೊಳ್ಳವ
ಇಚ್ಛೆ ಇರಬಹುದು, ಆಳವಾದ ಅಧ್ಯಯನ
ಮಾಡುವ ತುಡಿತ ಅಥವಾ ಜಗತ್ತಿನ
ಇನ್ಯಾವುದೇ ವಿಷಯ
ಅಥವಾ ವಸ್ತುವನ್ನು ಹೊಂದುವ ಬಯಕೆ
ಇರಬಹುದು.
ಒಂದಲ್ಲ ಒಂದು ಬಯಕೆ
ಈಡೇರಿಸಿಕೊಳ್ಳಲು ಶ್ರಮಿಸುತ್ತಿರುವಾಗಲೇ ಇಡೀ ಬದುಕು ಮುಗಿದು ಹೋಗುತ್ತದೆ.
ಆದರೂ ನಮ್ಮ ಇಚ್ಛೆಗಳಿಗೆ ಕೊನೆಯಿಲ್ಲ.
ಒಂದು ಬಯಕೆ ಮುಗಿದಾಗ
ಮತ್ತೊಂದು ಎದ್ದು ನಿಲ್ಲುತ್ತದೆ.
ಅದನ್ನೂ ಪೂರೈಸಿದಾಗ,
ಇನ್ನೊಂದು ಪುಟಿದೇಳುತ್ತದೆ.
ಪ್ರತಿಬಾರಿಯೂ ಹೊಸ ಕೊಂಡಿ
ಸೇರಿಕೊಳ್ಳುತ್ತಲೇ ಇರುತ್ತದೆ.
ಜಾಹೀರಾತುಗಳ ಪೋಸ್ಟರ್ಗಳು,
ಭಿತ್ತಿಪತ್ರಗಳು ಎಲ್ಲಿ ನೋಡಿದರಲ್ಲಿ
ರಾರಾಜಿಸುತ್ತಿವೆ. ಟಿವಿಗಳಲ್ಲಿ ,
ರೇಡಿಯೋಗಳಲ್ಲಿ
ಅವುಗಳದ್ದೇ ಕಾರುಬಾರು. ನಮಗೆ
ಅಗತ್ಯವಿರುವ ಅಥವಾ ಇಲ್ಲದಿರುವ
ಸಾವಿರಾರು ಉತ್ಪನ್ನಗಳು ಮತ್ತು ಸೇವೆಗಳು ಪೇಟೆಯಲ್ಲಿ
ತುಂಬಿತುಳುಕುತ್ತಿವೆ. ಕೊಳ್ಳುವ ತುಡಿತ
ಹೆಚ್ಚುವಂತೆ ಮಾಡುತ್ತಿವೆ. ಈ
ಎಲ್ಲಾ ವಸ್ತುಗಳು ಕೊಡುವ ಆನಂದ
ಕ್ಷಣಿಕವಾದದ್ದು. ಅವು ಸ್ಪಲ್ಪಕಾಲವಷ್ಟೆ
ತೃಪ್ತಿ ನೀಡಬಹುದು. ಆದರೆ ನಿರಂತರವಾಗಿ
ಅಲ್ಲ. ಇಂತಹ
ವಸ್ತುಗಳು ಅಥವಾ ಸಂಬಂಧಗಳು ಕಳೆದುಹೋದಾಗ
ಅಗಾಧವಾದ
ನೋವನ್ನು ಉಂಟುಮಾಡುತ್ತವೆ.
ಯಾವುದೋ ಒಂದು ಕ್ಷಣದಲ್ಲಿ
ಇಡೀ ಜಗತ್ತೇ ಲೌಕಿಕ
ವಸ್ತುಗಳಿಗೆಲ್ಲಾ ಒಂದಿಲ್ಲೊಂದು ದಿನ
ಅಂತ್ಯವೆಂಬುದಿದೆ. ಕಡೆಗೊಂದು ದಿನ
ನಮಗಿಷ್ಟವಾದದ್ದನ್ನೆಲ್ಲಾ ಬಿಟ್ಟು ನಡೆದು ಬಿಡಬೇಕು ಎಂಬ
ನಗ್ನ ಸತ್ಯ ಮನವರಿಕೆಯಾಗುತ್ತದೆ.
ನಮ್ಮ ವ್ಯವಸ್ಥೆಯಿಡೀ ಬಯಕೆಗಳ
ಸುತ್ತಲೇ ಗಿರಕಿ ಹೊಡೆಯುವುದರಿಂದ,
ಸೂಕ್ತ ಬಯಕೆ
ಯಾವುದೆಂದು ಅರಿತುಕೊಳ್ಳಬೇಕಿದೆ.
ಎಲ್ಲಕ್ಕಿಂತ
ಮೊದಲು ಗುರಿಯನ್ನು ಆಯ್ದುಕೊಳ್ಳಬೇಕು.
ಒಂದಾಗುವ ಗುರಿ
ಹೊಂದುವುದೇ ಜೀವನಕ್ಕೆ ಸರಿಯಾದ
ಗುರಿ. ಆದರೆ ನಾವು ಲೌಕಿಕ
ಆಸೆಗಳನ್ನು ಪೂರೈಸಿಕೊಳ್ಳಲು ಬದುಕಿನ
ಬಹುತೇಕ ಭಾಗವನ್ನು ಸವೆಸುತ್ತೇವೆ.
ಇವೆಲ್ಲಾ ಈಡೇರಿದ
ಬಳಿಕವೂ ಇವ್ಯಾವುವೂ ನಮಗೆ ಸಂತೋಷ
ಕೊಡಲಿಲ್ಲವೆಂಬುದು ಅರಿವಾಗುತ್ತದೆ.
ಸಂತೋಷವನ್ನು ನಮ್ಮೊಳಗೇ ಹುಡುಕಬೇಕೆಂಬ
ತಿಳಿವಳಿಕೆ ಮೂಡುತ್ತದೆ.
ನೆಲ, ಜಲ, ಅನಿಲ ಅನಲಗಳಿಂದ ನಾಶವಾಗದ
ಸಂತೋಷದ ಮೂಲವಿರುವುದು ಒಂದೇ.
ಅದನ್ನು ಯಾವತ್ತೂ ನಮ್ಮಿಂದ
ಕಿತ್ತುಕೊಳ್ಳಲಾಗದು. ನಮ್ಮ ಸಂತೋಷದ
ಮೂಲ..
ನಾವು ಯಾರು ಎಂಬುದಕ್ಕೆ ಉತ್ತರ
ಕಂಡುಕೊಳ್ಳಬೇಕಿದೆ. ಇದು ದೊರೆತರೆ
ಇನ್ಯಾವ ಬಯಕೆ ಈಡೇರಿದಾಗಲೂ ಸಿಕ್ಕದ
ಆನಂದ ನಮ್ಮದಾಗುತ್ತದೆ. ಸರಿಯಾದ
ಸ್ಥಳದಲ್ಲಿ ಹುಡುಕಿದಾಗ ಮಾತ್ರ ಶಾಶ್ವತ
ಆನಂದ ನಮ್ಮದಾಗುತ್ತದೆ.

No comments:

Post a Comment